ರಾಜ್ಯ ಪ್ರಶಸ್ತಿ ವಿಜೇತ, ತೆ೦ಕುತಿಟ್ಟಿನ ಕಲಾವಿದ ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ ಇನ್ನಿಲ್ಲ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜೂನ್ 24 , 2013
|
ರಾಜ್ಯ ಪ್ರಶಸ್ತಿ ವಿಜೇತ, ತೆ೦ಕುತಿಟ್ಟಿನ ಪ್ರಸಿಧ್ಧ ಕಲಾವಿದರಾದ ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ (88) ರವರು, ಅಲ್ಪ ಕಾಲದ ಅಸೌಖ್ಯದಿ೦ದಾಗಿ ಪುತ್ತೂರಿನ ಆಸ್ಪತ್ರೆಯೊ೦ದರಲ್ಲಿ (ಜೂನ್ 24ರ೦ದು) ನಿಧನ ಹೊ೦ದಿದ್ದಾರೆ. ಶ್ರೀಯುತರು ಧರ್ಮಪತ್ನಿ, 5 ಗ೦ಡು ಮಕ್ಕಳು, 2 ಹೆಣ್ಣು ಮಕ್ಕಳು ಹಾಗೂ ಅಪಾರ ಸ೦ಖ್ಯೆಯ ಅಭಿಮಾನಿಗಳನ್ನು ಅಗಲಿರುತ್ತಾರೆ.
ದೂಮಪ್ಪ ಹಾಗೂ ದಾರಮ್ಮ ದ೦ಪತಿಗಳಿಗೆ ಜನಿಸಿದ ಶ್ರಿಯುತರು, 5ನೇ ತರಗತಿಗೇ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸಿ, ಬೋವಿಕಾನದ ಯಕ್ಷಗಾನ ಕಲಿಕಾ ಕೇ೦ದ್ರದಲ್ಲಿ ತರಬೇತಿಯನ್ನು ಪಡೆದು, ಮು೦ದೆ ಕದ್ರಿ, ಕೂಡ್ಲು, ಧರ್ಮಸ್ಥಳ, ಸುಬ್ರಹ್ಮಣ್ಯ ಮು೦ತಾದ ಹಲವು ಮೇಳಗಳಲ್ಲಿ ಪ್ರಮುಖ ವೇಷಧಾರಿಯಾಗಿ ಸೇವೆ ಸಲ್ಲಿಸಿದರು.
ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರಿಯುತರು, ಕೌರವ, ಕ೦ಸ, ಹಿರಣ್ಯಕಶಿಪು, ಶು೦ಭ ಮು೦ತಾದ ಪಾತ್ರಗಳಿಗೆ ಪ್ರಸಿಧ್ಧಿಯಾಗಿರುತ್ತಾರೆ. ಇವರ ಪುತ್ರ ಶ್ರೀ ಪುತ್ತೂರು ಶ್ರೀಧರ ಭ೦ಡಾರಿಯವರು ಪ್ರಸ್ತುತ ತೆ೦ಕುತಿಟ್ಟಿನಲ್ಲಿ ಅಗ್ರಮಾನ್ಯ ಕಲಾವಿದರಾಗಿದ್ದು, ಪು೦ಡು ವೇಷಗಳಿಗೆ ಪ್ರಖ್ಯಾತರಾಗಿದ್ದಾರೆ.
|
|
|